ಬರೆಯಲು ಕುಳಿತಾಗಲೆಲ್ಲ
ಪದ ಮೂಡುವ ಮುಂಚೆ
ಮುಚ್ಚಿದ್ದ ಕದವ ತಟ್ಟಿದ್ದು
ನೆನಪಾಗುವುದು .
ನೋವು ನಲಿವಾದರೆ ಚೆನ್ನ
ನಲಿವಿಗಾಗಿ ನೋವ ಹುಡುಕುವುದು
ತಪ್ಪಾಗುವುದು .
ಖಾಲಿ ಹಾಳೆಯ ಮೇಲೇನಿಲ್ಲಾ
ಆದರೇನು
ಮಾಡಲಿ ಬರೆದರದು
ತುಂಬುವುದು .
ಮುಗ್ದ
ಮನಸ್ಸು ಪ್ರಸವಿಸಿ
ತೊದಲು
ರಾತ್ರಿ - ಮತ್ತೆ ಬಸುರಿ
ಬಯಕೆಯಾಗುವುದು.
ಚಿತ್ರ ಕೃಪೆ : ಗೂಗಲ್ ಇಮೇಜಸ್
ಆಯುಧವನೆಲ್ಲಾ
ಪೂಜೆಗಿಟ್ಟಿದ್ದೇನೆ
ಭಯವಿಲ್ಲ ಬನ್ನಿ
ಎಂದೆ .....
ನಂಬಿ ಬಂದ ನನ್ನ
ಕ್ಷಣ ಮಾತ್ರದಲಿ
..................
..................
..................
ನಿನ್ನ ನಯನದಿಂದ
ಕೊಂದೆ ........!!
ಚಿತ್ರ ಕೃಪೆ : ಗೂಗಲ್ ಇಮೇಜಸ್