ಒರಟು ನೆಲವೇ ಮನ
ಹರಕು ಚಾಪೆಯೇ ಭಾವ
ಕಮಟು ದಿಂಬಿನ ಕನಸು
ಹಿಡಿದಿಟ್ಟಿದ್ದ ರಾತ್ರಿ ...
ಗಲ್ ಗೆಜ್ಜೆಯ ಮುಂಜಾನೆ
ಕಣ್ ಕೋಲ್ಮಿಂಚು ಹರಿದು
ಬಾಗಿಲು ಬಡಿದಾ ಸದ್ದು
ತೆರೆದೆ ಮಾತಾಡದೇ..
ಹರಕು ಚಾಪೆಯೇ ಭಾವ
ಕಮಟು ದಿಂಬಿನ ಕನಸು
ಹಿಡಿದಿಟ್ಟಿದ್ದ ರಾತ್ರಿ ...
ಗಲ್ ಗೆಜ್ಜೆಯ ಮುಂಜಾನೆ
ಕಣ್ ಕೋಲ್ಮಿಂಚು ಹರಿದು
ಬಾಗಿಲು ಬಡಿದಾ ಸದ್ದು
ತೆರೆದೆ ಮಾತಾಡದೇ..
ಒಳ ಬಂದು ಕುಳಿತು
ಕಿಲ ಕಿಲನೆ ನಕ್ಕು
ಬಿರ ಬಿರನೆ ಹೊರನಡೆದೆ
ಹೇಳದೇ ..ಕೇಳದೇ..
ಬಂದು ಬಿತ್ತಿದವಳು
ಎತ್ತ ಹೋದಳವಳು
ಕೇಳಿತು ಅನುದಿನ
ಎನ್ನ ಮನ ನಿನ್ನಾಣೆ ..
ತೆರೆದು ಹೊರಬಾಗಿಲು
ಜಡಿದೆ ಒಳ ಬಾಗಿಲು
ನಿನಗೆ ಸ್ವಾಗತ
ನನಗೆ ಸ್ವಗತ ಅನುದಿನಾ .
ಚಿತ್ರ ಕೃಪೆ : ಗೂಗಲ್ ಇಮೇಜಸ್
No comments:
Post a Comment