Tuesday 22 July 2014

ಸ್ಮಶಾನ ವೈರಾಗ್ಯ ....

ಸುಖದೊಂದು ಮಾತು
ದುಃಖದೆರೆಡು ಮಾತು
ಸುಖ ದುಃಖ ಅಪ್ಪಿದೊಡೆ
ಎಲ್ಲರೋಪ್ಪುವಂತಾಯ್ತು
ದುಃಖ ಮರೆಸಿ ಸುಖ ಮೆರೆದರೆ
ಸೊಲ್ಲಿಗವನತಿಯ ಹೊತ್ತು
ಮಾತು ಹೊತ್ತು ಕಾಯುವವ
ಎಳೆದೊಡನೆ ಕಾಯ
ಕೈಲಾಸಕೆ ತೇರು
ಹಚ್ಚದಿರುವರಾ ನೆಂಟರು
ದೈವಕೆ ನೊಂದೆಣ್ಣೆಯಲ್ಲಿ  
ನೆಂದ ಹತ್ತಿ ಬತ್ತಿಯ ಪೈರು.


ಯಾರು ಮಾಡಿದರೇನು
ಚಿತೆಗೆ ಅಗ್ನಿಸ್ಪರ್ಶ
ತಿಳಿಯಲಿಕ್ಕೆ " ನಾನು "
ಅಲ್ಲಿ ಇಲ್ಲಾ ...

ಬೆಂಕಿ ಹಚ್ಚಿದ್ದು ಬರಡು ದೇಹಕ್ಕೆ
ನಿಜಕ್ಕೂ ಬೆಂದ್ದು ಹೋದದ್ದು
ಸತ್ತವನ ಸುತ್ತ ನೀರವದಿ

ನೆರೆದಿದ್ದ ಆತ್ಮಗಳಲ್ಲವೇ!! 

                                                       
                                  ಚಿತ್ರ ಕೃಪೆ : ಗೂಗಲ್ ಇಮೇಜಸ್ 


No comments:

Post a Comment